ಭ್ರಮೆ

ಅಚ್ಚೋದ ಸರೋವರದ ಅಚ್ಚಗನ್ನಡಿಯಲ್ಲಿ ತಿದ್ದಿ ತೀಡಿದ
ಹೊಚ್ಚ ಹೊಸ ರೂಪಾಗಿ ಬರುತ್ತೀಯೆ.
ಗಂದಬಂಧವಾಗಿ ಬಂದವಳು ಕಿಟಕಿ ಬಾಗಿಲುಗಳ ಬಂದುಮಾಡಿ
ಕಪಾಟಿನ ಕೀಲಿ ಕಳಚಿ ಅಸ್ತವ್ಯಸ್ತವನ್ನೆಲ್ಲ ಓರಣಮಾಡುತ್ತೀಯೆ.
ಎದೆಮೇಲೆ ಹೂಹೆಜ್ಜೆಯಿಟ್ಟು ಗೆಜ್ಜೆಗುಂಗಿನಲ್ಲಿ ಮುಳುಗಿಸುತ್ತ
ಕಣ್ಣದಾಳ ಚಿಮ್ಮಿ ಆಳಕ್ಕೆ ಗೆಲ್ಲುತ್ತ
ಸರ್ಪಸುತ್ತಿನಲಿ ನನ್ನ ಅಂಗುಲಂಗುಲ ನುಂಗುತ್ತ
ನಾನು, ನನ್ನ ಅಸ್ತಿತ್ವ ಇಲ್ಲವಾಗಿ- ಅಲ್ಲ ಎಲ್ಲ ನೀನಾಗಿ
ನನಗಾಗಿ ನಾನು ತಡಕಾಡುವಾಗ ಬಿಗಿಬಂಧ ಸಡಿಲಾಗಿ
ಬಿರುಗಾಳಿ ಬೀಸಿ ಬೆಚ್ಚಿ ನೋಡಿದಾಗ
ನಾನು ಮತ್ತು ನನ್ನ ರೂಮು; ತೆರೆದ ಕಿಟಕಿ ಬಾಗಿಲು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post W B Yeats – ಅನನ್ಯ ಕಾವ್ಯ ಸಂವೇದನೆಯ ಕವಿ
Next post ಪ್ರೀತಿ ಹುಡುಗಾಟ

ಸಣ್ಣ ಕತೆ

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ರಾಮಿ

    ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

cheap jordans|wholesale air max|wholesale jordans|wholesale jewelry|wholesale jerseys